ಶಶಾಂಕ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸುಷ್ಮಾ ಮತ್ತು ಎಸ್.ಹರೀಶ್ ಅವರು ನಿರ್ಮಿಸಿರುವ ‘ಪ್ರಾರ್ಥನೆ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ.
ಕೆ.ಸದಾಶಿವ ಶೆಣೈ ನಿರ್ದೇಶನದ ‘ಪ್ರಾರ್ಥನೆ ಚಿತ್ರಕ್ಕೆ ಜೆ.ಎಂ.ಪ್ರಹ್ಲಾದ್ ಕಥೆ ಬರೆದಿದ್ದಾರೆ. ಚಿತ್ರಕ್ಕೆ ಸಂಭಾಷಣೆ ಬರೆಯುವಲ್ಲಿ ಪ್ರಹ್ಲಾದ್ ನಿರ್ದೇಶಕರಿಗೆ ಸಾಥ್ ನೀಡಿದ್ದಾರೆ. ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ ಎಂಬ ಅಡಿಬರಹವಿರುವ ಈ ಚಿತ್ರಕ್ಕೆ ರಾಮಚಂದ್ರ ಐತಾಳರ ಛಾಯಾಗ್ರಹಣವಿದೆ. ಅನಿಲ್ನಾಯ್ಡು ಸಂಕಲನ, ದಿನೇಶ್ ಮಂಗಳೂರು ಕಲಾ ನಿರ್ದೇಶನ ‘ಪ್ರಾರ್ಥನೆ ಚಿತ್ರಕ್ಕಿದೆ.
ವೀರಸಮರ್ಥ್ ಸಂಗೀತ ನೀಡಿರುವ ಈ ಚಿತ್ರದ ತಾರಾಬಳಗದಲ್ಲಿ ಅನಂತನಾಗ್, ಪವಿತ್ರಾಲೋಕೇಶ್, ಇನ್ಫೋಸಿಸ್ ಸಂಸ್ಥೆಯ ಸುಧಾಮೂರ್ತಿ, ಪ್ರಕಾಶ್ ರೈ, ಅಶೋಕ್, ಬಿ.ಸಿ.ಪಾಟೀಲ್, ಮಠ ಗುರುಪ್ರಸಾದ್, ಮಾ:ಸಚಿನ್, ಮಾ:ಮನೋಜ್ ಮುಂತಾದವರಿದ್ದಾರೆ.
‘ಬಣ್ಣದಕೊಡೆಗೆ ರೀರೆಕಾರ್ಡಿಂಗ್ ಪೂರ್ಣ